ಜೀವನದಲ್ಲಿ ಎಲ್ಲಾ ವರ್ಗದ ಜನರು ರಿಸ್ಕ್ ಮತ್ತು ಅನಿರೀಕ್ಷಿತ ಘಟನೆಗಳಿಂದ ಸುರಕ್ಷತೆ ಪಡೆದುಕೊಳ್ಳಲು ಸಾಮಾನ್ಯವಾಗಿ ಜೀವದ, ಮನೆಯ ಮತ್ತು ವಾಹನ ವಿಮೆಯನ್ನು ಪಡೆದುಕೊಳ್ಳುತ್ತಾರೆ. ಅನೇಕ ಜನರು, ಅದರಲ್ಲೂ ಭಾರತೀಯರು ಹೋಮ್ ಇನ್ಶೂರೆನ್ಸ್ ಅನ್ನು ಅನಗತ್ಯವೆಂದು ಪರಿಗಣಿಸುತ್ತಾರೆ. ಆದಾಗ್ಯೂ, ವಿಶೇಷವಾಗಿ ನೈಸರ್ಗಿಕ ವಿಕೋಪಗಳಿಗೆ ಬಾಧಿತವಾಗಿರುವ ಪ್ರದೇಶಗಳಲ್ಲಿ ಭೂಕಂಪಗಳನ್ನು ಕವರ್ ಮಾಡುವ ಹೋಮ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಭೂಕಂಪಗಳು ಮನೆಯ ಭಾಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ, ಕೆಲವು ಸಂದರ್ಭಗಳಲ್ಲಿ, ಅವು ಭೂಕಂಪದ ತೀವ್ರತೆಯನ್ನು ಅವಲಂಬಿಸಿ ಮನೆ/ಮನೆ ಸಂಕೀರ್ಣ/ಫ್ಲಾಟ್ನ ಸಂಪೂರ್ಣ ನಾಶಕ್ಕೆ ಕಾರಣವಾಗಬಹುದು..
ಭಾರತವು ಭಾರೀ ಭೂಕಂಪಗಳಿಗೆ ತುತ್ತಾಗಬಲ್ಲ ದೇಶವಾಗಿದೆ. 2001 ರ ಭುಜ್ ಭೂಕಂಪವು ಪಶ್ಚಿಮ ಭಾರತ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದ ಅತ್ಯಂತ ವಿನಾಶಕಾರಿ ಭೂಕಂಪಗಳಲ್ಲಿ ಒಂದಾಗಿತ್ತು. ಅಂತಹ ಭೂಕಂಪದಿಂದ ಉಂಟಾದ ಹಾನಿಯು ಭಾರೀ ಜೀವಹಾನಿ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಭೂಕಂಪದ ಕವರೇಜ್ ಇರುವ ಹೋಮ್ ಇನ್ಶೂರೆನ್ಸ್ ಖರೀದಿಸುವ ವೆಚ್ಚವು ಭೂಕಂಪ ಸಂಭವಿಸಿದಾಗ ಮನೆಯನ್ನು ರಿಪೇರಿ ಮಾಡಿಸುವ ವೆಚ್ಚಕ್ಕಿಂತ ಕಡಿಮೆಯಾಗಿರುತ್ತದೆ.
ಭೂಕಂಪಗಳ ಸಾಧ್ಯತೆ ಮತ್ತು ತೀವ್ರತೆಯ ಆಧಾರದ ಮೇಲೆ ಭಾರತದಲ್ಲಿ 4 ಸೀಸ್ಮಿಕ್ ಜೋನ್ಗಳನ್ನು (ಭೂಕಂಪ ವಲಯಗಳನ್ನು) ಗುರುತಿಸಲಾಗಿದೆ.
ಮನೆ ಹಾಗೂ ಅದರೊಳಗಿನ ವಸ್ತುಗಳಿಗೆ ಕವರೇಜ್
ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳ ಹಾನಿಯ ವಿರುದ್ಧ ಕವರೇಜ್
ಭೂಕಂಪದಿಂದ ಸೃಷ್ಟಿಯಾಗುವ ಪ್ರವಾಹಕ್ಕೆ ಸಂಬಂಧಿಸಿದ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಪಾಲಿಸಿ ಅಡಿಯಲ್ಲಿ ಅನ್ವಯವಾಗುವ ಡಿಡಕ್ಟಿಬಲ್ಗಳನ್ನು ಹೊರತುಪಡಿಸಲಾಗಿದೆ
ಗಳಿಕಯಲ್ಲಿ ನಷ್ಟ ಹಾಗೂ ಯಾವುದೇ ರೀತಿಯ ಪರೋಕ್ಷ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಆರ್ಕಿಟೆಕ್ಟ್, ಸರ್ವೇಯರ್ ಅಥವಾ ಕನ್ಸಲ್ಟಿಂಗ್ ಎಂಜಿನಿಯರ್ಗಳ ಶುಲ್ಕವನ್ನು (3% ಕ್ಲೈಮ್ ಮೊತ್ತಕ್ಕಿಂತ ಹೆಚ್ಚು) ಕವರ್ ಮಾಡಲಾಗುವುದಿಲ್ಲ
ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ
ಬಾಡಿಗೆಯ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ
ಪರ್ಯಾಯ ವಸತಿಯ ಬಾಡಿಗೆ ಮೊತ್ತ, ಹೆಚ್ಚುವರಿ ವೆಚ್ಚವಾಗಿದ್ದು ಅದನ್ನು ಕವರ್ ಮಾಡಲಾಗುವುದಿಲ್ಲ
ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ
ಭೂಮಿಯ ಕೇಂದ್ರಭಾಗದಲ್ಲಿರುವ ಟೆಕ್ಟಾನಿಕ್ ಪ್ಲೇಟ್ಗಳಲ್ಲಿ ದೋಷ ಕಾಣಿಸಿಕೊಂಡು, ಅಲ್ಲಿ ಸೃಷ್ಟಿಯಾದ ಒತ್ತಡ ಹಠಾತ್ತಾಗಿ ಬಿಡುಗಡೆ ಆಗುವುದರಿಂದ ಭೂಕಂಪ ಉಂಟಾಗುತ್ತದೆ. ಟೆಕ್ಟಾನಿಕ್ ಪ್ಲೇಟ್ಗಳ ಚಲನೆಯಿಂದಾಗಿ ಈ ಒತ್ತಡವು ಕ್ರೋಢೀಕೃತವಾಗಿ, ಚಲನೆಯಲ್ಲಿ ಹಠಾತ್ ಏರುಪೇರು ಉಂಟಾಗಿ ಭೂಕಂಪ ಸೃಷ್ಟಿಯಾಗುತ್ತದೆ. ದೇಶದ ಈಶಾನ್ಯ ಭಾಗ ಮತ್ತು ಸಂಪೂರ್ಣ ಹಿಮಾಲಯ ಭೂಪ್ರದೇಶದಲ್ಲಿ 8.0 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಭೂಕಂಪಕ್ಕೆ ಮುಖ್ಯ ಕಾರಣವೆಂದರೆ, ಭಾರತೀಯ ಟೆಕ್ಟಾನಿಕ್ ಪ್ಲೇಟ್ಗಳು ಪ್ರತಿ ವರ್ಷ ಸುಮಾರು 50 mm ದರದಲ್ಲಿ ಯುರೇಶಿಯನ್ ಪ್ಲೇಟ್ಗಳ ಕಡೆಗೆ ಚಲಿಸುತ್ತಿವೆ
ಹಿಮಾಲಯ ಮತ್ತು ಇಂಡೋ-ಗ್ಯಾಂಗೆಟಿಕ್ ಬಯಲು ಮಾತ್ರವಲ್ಲದೆ, ಭಾರತದ ಪರ್ಯಾಯ ದ್ವೀಪಗಳೂ ಭೂಕಂಪಕ್ಕೆ ತುತ್ತಾಗುವ ಸಾಧ್ಯತೆ ಇದೆ. ಐತಿಹಾಸಿಕ ವರದಿಗಳ ಪ್ರಕಾರ, ಭಾರತದ 50% ಕ್ಕಿಂತ ಹೆಚ್ಚು ಪ್ರದೇಶಗಳು ಅಪಾಯಕಾರಿ ಭೂಕಂಪಗಳಿಗೆ ತುತ್ತಾಗುವ ಸಾಧ್ಯತೆ ಹೊಂದಿವೆ. ರಿಕ್ಟರ್ ಸ್ಕೇಲ್ನಲ್ಲಿ 6.0 ಕ್ಕಿಂತ ಹೆಚ್ಚಿನ ತೀವ್ರತೆಯನ್ನು ಹೊಂದಿರುವ ಭೂಕಂಪವನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ, ಇದು ಭಾರಿ ಪ್ರಮಾಣದ ಜೀವಹಾನಿ ಮತ್ತು ಆಸ್ತಿಹಾನಿ ಮಾಡಬಲ್ಲದು.
ಸುರಕ್ಷಿತ 1.5+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.5+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್